Slide
Slide
Slide
previous arrow
next arrow

ಲಾರಿ, ಬುಲೆರೋ ವಾಹನ ನಡುವೆ ಡಿಕ್ಕಿ: ಓರ್ವ ಸಾವು

300x250 AD

ಯಲ್ಲಾಪುರ: ಮೀನು ಸಾಗಾಟದ ಲಾರಿ ಮತ್ತು ದಾಳಿಂಬೆ ಸಾಗಿಸುತ್ತಿದ್ದ ಬುಲೆರೋ ವಾಹನಗಳ ನಡುವೆ ರಾ.ಹೆದ್ದಾರಿ ೬೩ ಗೇರಗದ್ದೆ ಕ್ರಾಸ್ ಬಳಿ ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದಾನೆ.

ಯಲ್ಲಾಪುರ ಕಡೆಯಿಂದ ಅತೀವೇಗ ನಿಷ್ಕಾಳಜಿಯಿಂದ ಅಂಕೋಲಾ ಕಡೆ ಹೊರಟಿದ್ದ ಬುಲೇರೋ ಹಾಗೂ ಎದುರಿನಿಂದ ಬಂದ ಮೀನು ಗಾಡಿ ಕಂಟೇನರ್ ನಡುವೆ ಡಿಕ್ಕಿ ಸಂಭವಿಸಿದೆ.ಕಂಟೇನರ್ ಚಾಲಕ ಕೆ.ವಿ.ಸತ್ಯನಾರಾಯಣ ಗಂಭೀರ ಸ್ವರೂಪದ ಗಾಯವಾಗಿ ಆಸ್ಪತ್ರೆಗೆ ದಾಖಲಿಸಿ ಕೆಲಕ್ಷಣದಲ್ಲಿ ಸಾವನ್ನಪ್ಪಿದ್ದಾರೆ.ಪಿಕ್ ಅಪ್ ಬುಲೇರೋ ಚಾಲಕ ಅಬ್ದುಲ್ ಅಜೀಜ್ ಮೋಹಿದ್ದಿನ್ಸಾಬ್ ದಖನಿ ಈತನ ಮೇಲೆ ದೂರು ದಾಖಲಿಸಲಾಗಿದೆ. ಡಿಕ್ಕಿ ಹೊಡೆತಕ್ಕೆ ಎರಡೂ ವಾಹನಗಳು ಜಖಂಗೊಂಡಿದೆ. ದಾಳಿಂಬೆ ಹಣ್ಣುಗಳು ಹೆದ್ದಾರಿಯಲ್ಲಿ ಚೆಲ್ಲಿ ಬಿದ್ದಿದ್ದು, ಜನ ಅದನ್ನು ಹೆಕ್ಕುವುದಕ್ಕೆ ಮುಗಿಬಿದ್ದ ದೃಶ್ಯ ಕಂಡುಬಂದಿದೆ. ಈ ಅಪಘಾತದಿಂದ ಕೆಲಹೊತ್ತು ರಸ್ತೆ ಸಂಚಾರ ವ್ಯತ್ಯಯವಾಗಿತ್ತು.ನಂತರ ಪೋಲಿಸರು ಸಂಚಾರಕ್ಕೆ ಅನುವು ಮಾಡಿಕೊಟ್ಟರು.

300x250 AD
Share This
300x250 AD
300x250 AD
300x250 AD
Back to top